Saturday, July 7, 2012

ನಾ ಮಾತ್ರ ಮಿಲ್ಟ್ರೀಗೆ ಹೋಗಂಗಿಲ್ಲ!

ದೇಶಭಕ್ತ ತಂದೆಯೊಬ್ಬನಿಗೆ ತನ್ನ ಮಗ ದೊಡ್ಡವನಾದ ಮೇಲೆ ಮಿಲ್ಟ್ರೀಗೆ ಸೇರಿ ದೇಶವನ್ನು ರಕ್ಷಣೆ ಮಾಡಲಿ ಎಂಬ ಆಸೆಯಿತ್ತು. ಮಗ ದೊಡ್ಡವನಾದ, ಆದರೆ ಮಿಲ್ಟ್ರೀಗೆ ಸೇರು ಅಂದ್ರೆ ಮಾತ್ರ "ಊಹೂಂ!" ಅಂದ! ಅಪ್ಪನಿಗೆ ಚಿಂತೆ ಹತ್ತಿಕೊಂಡಿತು. ಒಂದು ದಿನ ಮಗನನ್ನು ಕೂಡಿಸಿಕೊಂಡು ಕೇಳಿದ,

"ಏನು ಕಾರಣ ಮಗನೇ? ಮಿಲ್ಟ್ರೀಗೆ ಹೋಗೋಕೆ ಯಾಕೆ ಬೇಡ ಅಂತೀಯ?"

"ಆಪ್ಪ, ಹೆಳುತ್ತೇನೆ ಕೇಳು. ಮಿಲ್ಟ್ರೀಗೆ ಹೋದರೆ ಎರಡು ಸಾಧ್ಯತೆಗಳು. ಯುದ್ಧ ಆಗಬಹುದು ಅಥವ ಆಗದೇ ಇರಬಹುದು. ಯುಧ್ಧ ಆಗದಿದ್ದರೆ ಸಮಸ್ಸೆ ಇಲ್ಲ, ಆದರೆ ಮತ್ತೆರಡು ಸಾಧ್ಯತೆಗಳು"

"ಹೇಳಪಾ ಮಗನೆ, ಏನವು?"

"ಯುದ್ಧಕ್ಕೆ ನನ್ನನ್ನ ಕಳಿಸಬಹುದು ಅಥವ ಕಳಿಸದೆ ಇರಬಹುದು. ಕಳಿಸದಿದ್ದರೆ ಸಮಸ್ಸೆ ಇಲ್ಲ, ಕಳಿಸಿದರೆ ಮತ್ತೆರಡು ಸಾಧ್ಯತೆಗಳು!"

"ಮುಂದುವರಿಸು..."

"ಯುದ್ಧದಲ್ಲಿ ನಾನು ಸಾಯಬಹುದು ಅಥವಾ ಸಾಯಲಿಕ್ಕಿಲ್ಲ. ಸತ್ತಿಲ್ಲ ಅಂದ್ರೆ ಪರವಾಗಿಲ್ಲ, ಸತ್ತರೆ ಮತ್ತೆರಡು ಸಾಧ್ಯತೆಗಳು"

"ಹೂಂ...?"

"ಸತ್ತಾಗ ನನ್ನನ್ನು ಸುಡಬಹುದು ಅಥವ ಮಣ್ಣಲ್ಲಿ ಹುಗಿಯಬಹುದು. ಸುಟ್ಟರೆ ತೊಂದರೆ ಇಲ್ಲವೇ ಇಲ್ಲ, ಮಣ್ಣಲ್ಲಿ ಹುಗಿದರೆ ಮತ್ತೆರಡು ಸಾಧ್ಯತೆಗಳು!"

"??"

"ನನ್ನನ್ನು ಮಣ್ಣು ಮಾಡಿದ ಜಾಗದಲ್ಲಿ ಗಂಧದ ಗಿಡ ಹುಟ್ಟಬಹುದು ಅಥವಾ ಹುಟ್ಟಲಿಕ್ಕಿಲ್ಲ. ಗಿಡ ಹುಟ್ಟಿಲ್ಲವೆಂದರೆ no problem, ಹುಟ್ಟಿದರೆ ಮತ್ತೆರಡು ಸಾಧ್ಯತೆಗಳು..."

ಅಪ್ಪನಿಗೆ ಆಗಲೆ ಸುಸ್ತಾಗಿತ್ತು, ಆದರೂ ಕುತುಹಲವಿತ್ತು! "ಏನು?" ಅಂದ

"ಆ ಗಂಧದ ಗಿಡದಲ್ಲಿ ಸಾಬೂನು ತಯರಿಸಬಹುದು ಅಥವಾ ತಯಾರಿಸಲಿಕ್ಕಿಲ್ಲ. ಸಾಬೂನು ತಯಾರಾಗಿಲ್ಲ ಅಂದ್ರೆ ಎನೂ ಪ್ರೊಬ್ಲೆಮ್ ಇಲ್ಲಾಪ್ಪ, ಸಾಬೂನು ರೆಡಿ ಆದ್ರೆ, ಅದನ್ನ ಹುಡುಗಿಯರು ಉಪಯೋಗಿಸಿದ್ರೆ, ನನಗೆ ನಾಚಿಗೆ ಆಗುತ್ತೆ! ಅದಕ್ಕೆ ನಾನು ಮಿಲ್ಟ್ರೀ ಸೇರೋಕೆ ಆಗಂಗಿಲ್ಲ ಅಂತ ಹೇಳಿದ್ದು!!!"

ಅಪ್ಪನಿಗೆ ಸುಸ್ತಾಗಿ, ಮಗನನ್ನ ಮಿಲ್ಟ್ರೀಗೆ ಸೇರಿಸೊ ಆಸೆಗೆ ಅವತ್ತಿನಿಂದ ನೀರು ಬಿಟ್ಟ...!


(ಯಾವಾಗಲೋ ಕೇಳಿದ ಕತೆ, ಇವತ್ತ್ಯಾಕೋ ನೆನಪಾತು. ಹಂಚಿಕೊಳ್ಳೋಣ ಅಂತ ಬರದೆ. ಚೊಲೊ ಅನಿಸಿದ್ರ comment ಬರೀರಿ, ಇಲ್ಲಾಂದ್ರ ಸುಮ್ನ ಇದ್ದುಬಿಡ್ರೀ! ಆಗಬಹುದಾ?)