Monday, July 15, 2019

ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...!

ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...!
ಯಾಕೆಂದರೆ ಅವರಿಗೆ ನೀರಿನ ಮಹತ್ವ ಗೊತ್ತಿಲ್ಲ.
ರಾಜ್ಯದ ಎಷ್ಟೋ ಕಡೆ, ಸ್ನಾನ ಮಾಡುವುದಿರಲಿ ಕುಡಿಯಲೂ ನೀರಿಲ್ಲ ಅಂತ ಅವರಿಗೆ ದೇವರಾಣೆಗೂ ಗೊತ್ತಿಲ್ಲ.
ದುಡ್ಡು ಬೀಸಾಕಿದರೆ ನೀರು ಸಿಗುತ್ತೆ ಅದೇನ್ ಮಹಾ ಅಂತ ಅವರ ತಿಳುವಳಿಕೆ.

ಇರಾನ್ ನಿಂದ ಎಣ್ಣೆ ಬರುತ್ತಿಲ್ಲ. ಇನ್ನೂ ಒಂಬತ್ತು ದಿನ ಅಷ್ಟೇ ಪೆಟ್ರೋಲ್ ಸ್ಟಾಕ್ ಇರೋದು ಅನ್ನುವ ಸುದ್ದಿ ಕೇಳಿ ಭಯಪಟ್ಟು ಸರತಿಯಲ್ಲಿ ನಿಂತು ಪೆಟ್ರೋಲು ಹಾಕಿಸಿಕೊಳ್ಳುವ ಇವರಿಗೆ ಇನ್ನು ಕೆಲವೇ ವರ್ಷಗಳಲ್ಲಿ ಕುಡಿಯಲೂ ನೀರು ಸಿಗದು ಎಂಬ ವಿಚಾರ ಇನ್ನೂ ಅರಿವಾಗಿಲ್ಲ..
ಅಂಗಳ ತೊಳೆಯಲು ಅಷ್ಟೆಲ್ಲ ನೀರು ಬಳಸಬೇಡಿ ಅಂದರೆ "ಅಯ್ಯೋ ವಿಜ್ಞಾನಿಗಳು ಏನೋ ಒಂದು ಕಂಡು ಹಿಡೀತಾರೆ ಬಿಡಿ" ಅನ್ನುವ ಉಡಾಫೆ ಅವರದು.
...ಇಂಥವರ ಕಾರು ತಳ ತಳ ಹೊಳೆಯಲು , ಅವರ ಅಂಗಳದ ಜೊತೆಗೆ ಮುಂದಿರುವ ರೋಡು ತೊಳೆಯಲು ಶರಾವತಿ, ಕಾವೇರಿ ನೀರನ್ನು ಹಾಗೂ ಎಷ್ಟೋ ಸಾವಿರ ಕೋಟಿ ದುಡ್ಡನ್ನು ವ್ಯರ್ಥ ಮಾಡುವುದರಲ್ಲಿ ಏನು ಅರ್ಥವಿದೆ? ಅಥವಾ ನಮಗೆ ತಿಳಿಯದ ಯಾವುದೋ "ಅರ್ಥಶಾಸ್ತ್ರ"...??

1 comment:

  1. ಅಗದೀ ಬರೋಬ್ಬರಿ ಹೇಳಿದಿರಿ!

    ReplyDelete