Saturday, January 19, 2008

"ಶೌಚ"ನೀಯ ಕತೆ

ಓದುಗರು ದಯವಿಟ್ಟು ಬೇಸರಿಸಬಾರದು, ನನಗೆ ಇದಕ್ಕಿಂತ ಒಳ್ಳೆಯ ತಲೆಬರಹ ಹೊಳೆಯಲಿಲ್ಲ. ಅಂದ ಹಾಗೆ, ಇದು ಶೌಚದ ಬಗ್ಗೆ ಇರುವ ಮೋಜಿನ ಬರಹ. ಶೌಚಕ್ಕೆ ಅವಸರವಾದಾಗ ಅದು ಶೋಚನೀಯ ಪರಿಸ್ಠಿತಿಯೇ ಎಂಬುದು ನನ್ನ ಅನುಭವಕ್ಕೆ ಬಂದ ಸಂಗತಿ; ಅದೂ ಆ ವೇಳೆಗೆ ಸರಿಯಾದ ವ್ಯವಸ್ಠೆ ಇಲ್ಲದಿದ್ದರೆ..? ಅಧೋಗತಿಯೇ! ಅಂತಹ ಕೆಲವು ಅನುಭವಗಳ ಕಂತೆಯೇ ಈ ಶೌಚನೀಯ ಕತೆ.
ನಾನು ಚಿಕ್ಕವನಿದ್ದಾಗಿನ ಸಂಗತಿ. ನಾವು ಆಗಾಗ, ನಮ್ಮೂರಿನ ಹತ್ತಿರದಲ್ಲೇ ಇರುವ, ನನ್ನ ಅತ್ತೆಯ ಊರಾದ ದೊಡ್ಡೊರಿಗೆ ಹೊಗುತ್ತಿದ್ದೆವು. ವಿಪರ್ಯಾಸವೆಂದರೆ, ಅದೊಂದು ಕುಗ್ರಾಮ, ಆದರೂ ಅದರ ಹೆಸರು ಮಾತ್ರ ದೊಡ್ಡೂರು! ಬಹುಶಃ ಹಿಂದಿನ ಕಾಲದಲ್ಲಿ ಆ ಪ್ರದೇಶದಲ್ಲಿ ಇದೇ ದೊಡ್ಡ ಊರಾಗಿದ್ದಿರಬಹುದು, ಇರಲಿ. ನಾನು ಅಲ್ಲಿಗೆ ಹೊಗುತ್ತಿದ್ದುದೇ ಅವಲಕ್ಕಿ ಆಸೆಗೆ! ಯಾಕೆಂದರೆ, ಹೋದ ತಕ್ಷಣ ಅತ್ತಿಗೆ, ಹಚ್ಚಿದ ಅವಲಕ್ಕಿ ತಿನ್ನಲು ಕೊಡುತ್ತಿದ್ದಳು. ಜೊತೆಗೆ ಕೆನೆ ಕೆನೆ ಮೊಸರು, ಕೇಳಬೆಕೆ? ಓಂದು ರೌಂಡು ಮುಗಿಸಿ ಇನ್ನೊಂದಕ್ಕೆ ಅಣಿಯಾಗುತ್ತಿದ್ದೆ. ಆದರೆ ಅಮ್ಮನ ಮುಖ ಮಾತ್ರ ತಪ್ಪಿಸುತ್ತಿದ್ದೆ. ಯಾಕೆಂದರೆ, ನಾನು ಆ ಪರಿ ತಿನ್ನುವುದು ಅವಳಿಗೆ ಇಷ್ಟವಿರಲಿಲ್ಲ. ಈಗ ಅದು ನನ್ನ ಹೆಂಡತಿಗೆ ಇಷ್ಟವಿಲ್ಲ. ಗಂಡಸಿನ ಪರಿಸ್ಠಿತಿಯೇ ಹಾಗೆ, ಚಿಕ್ಕವನಿದ್ದಾಗ ಅಮ್ಮನಿಗೆ ಹೆದರಬೇಕು; ದೊಡ್ಡವನಾದಾಗ ಹೆಂಡತಿಗೆ! ಆದರೆ ಒಂದು ಮಾತ್ರ ನಿಜ, ನಾನು ಆ ಪರಿಯಾಗಿ ತಿಂದ ಮೇಲೆ ಏನಾಗುವುದೆಂದು ಅಮ್ಮನಿಗೆ ಚೆನ್ನಾಗಿ ಗೊತ್ತಿತ್ತು. (ಈಗ ಅದು ನನ್ನ ಹೆಂಡತಿಗೂ ಗೊತ್ತಿದೆ!) ನನಗೆ ಗೊತ್ತಿರಲಿಲ್ಲವೆ? ಗೊತ್ತಿತ್ತು ಆದರೂ ಆಸೆ! ಅವಲಕ್ಕಿ ಅಂದ ಮೇಲೆ ಒಂದೇ ರೌಂಡು ತಿನ್ನುವುದೆ? ಆಮೇಲೆ ಏನಾಗುತ್ತೋ ನೋಡೋಣ ಎನ್ನುವ ಭಂಡ ಧೈರ್ಯ. ಶುರುವಾಯ್ತು ನೋಡಿ, ಹೊಟ್ಟೆಯಲ್ಲಿ, ಗಡ ಗಡ ಶಬ್ದ! ಜೊತೆಗೆ ನಡುಕ ಕೂಡ! ಯಾಕೆಂದರೆ, ದೊಡ್ಡೂರಿನಲ್ಲಿದ್ದುದೊಂದು ಅದ್ಭುತವಾದ ಶೌಚಾಲಯ! ಅದನ್ನು ನೆನೆಸಿಕೊಂಡರೆನೇ ಭಯವಾಗುತ್ತಿತ್ತು. ಅದು ಇದ್ದುದೇ ಹಾಗೆ. ಹಳೇ ಕಾಲದ ಭೂತ ಬಂಗ್ಲೇ ನೆನಪಿಸುವಂತಹ, ಕಲ್ಲಿನಲ್ಲಿ ಕಟ್ಟಿದ ಗೋಡೆಗಳು. ಮೇಲ್ಗಡೆ ಸೂರಂತೂ ಇಲ್ಲವೇ ಇಲ್ಲ. ಮೇಲಿನಿಂದ ಹಕ್ಕಿಗಳು ಹಿಕ್ಕಿ ಹಾಕಿದರೆ, ಒಳಗೆ ಕುಳಿತವರ ಮೇಲೇ ಡ್ಯೆರೆಕ್ಟಾಗಿ ಬೀಳುತ್ತಿತ್ತು. ಕಟ್ಟಿಗೆಯ ಬಾಗಿಲುಗಳು. ಸ್ವಲ್ಪ ಕೂಲಂಕುಷ್ವವಾಗಿ ವೀಕ್ಷಿಸಿದರೆ ,ಒಳಗೆ ಕುಳಿತವರು ಯಾರು ಅಂತ ಸ್ಪಷ್ಟವಾಗಿ ಹೇಳಬಹುದಿತ್ತು! ಇದೆಲ್ಲದರ ಹೊರತಾಗಿ ಅದು ಇದ್ದುದು ಮನೆಯಿಂದ ಸ್ವಲ್ಪ ದೂರದಲ್ಲಿ. ಆದ್ದರಿಂದ, ನಾನೊಬ್ಬನೆ ಅಲ್ಲಿಗೆ ಹೋಗುವ ಧೈರ್ಯ ಆಗ ನನ್ನಲ್ಲಿರುತ್ತಿರಲಿಲ್ಲ. ಅಂತೂ ಹರ ಸಾಹಸ ಮಾಡಿ, ಉದರ ಬೇನೆಯನ್ನು ಪರಿಹರಿಸಿಕೊಂಡು ಬರುತ್ತಿದ್ದೆ. ಆಮೇಲೆ ಅಮ್ಮನಿಂದ ಭರ್ತಿ ಬೈಗಳು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಕೆಳಿದ್ಯಾ, ಆ ಪರಿ ತಿನ್ನಬ್ಯಾಡಾ ಅಂದ್ರ! ಬೊರೊಬ್ಬರಿ ಆತು, ಹಿಂಗ ಆಗಬೇಕು ನಿನಗಅಂತ ಒಂದೇ ಸಮನೆ ಬೈಯುತ್ತಿದ್ದಳು. ನಾನು ಇನ್ನು ಮೇಲೆ ಅವಲಕ್ಕಿ ತಿನ್ನಬಾರದು ಅಂತ ನಿರ್ಧಾರ ಮಾಡುತ್ತಿದ್ದೆ. ಈಗಲೂ ಆಗಾಗ ಆ ನಿರ್ಧಾರ ತೆಗೆದುಕೊಳ್ಳುತ್ತಿರುತ್ತೇನೆ!
ಹೀಗೆ ನಾನು ಅನುಭವಿಸಿದ ಸಂಕಟಗಳು ಹಲವಾರು. ಬಸ್ಸಿನಲ್ಲಿ ಪ್ರಯಾಣಿಸುವಾಗಲೂ, ಸಂಕಟ ಅನುಭವಿಸಿದ್ದಿದೆ. ಒಂದು ಸಲ ಬಸ್ಸಿನಲ್ಲಿ ಮೈಸೂರಿಗೆ ಪ್ರಯಾಣಿಸುತ್ತಿದ್ದೆ. ಬೆಳಿಗ್ಗೆ ೬ ಗಂಟೆಗೆ ಬಸ್ಸು ಮೈಸೂರು ತಲುಪುವ ನಿರೀಕ್ಷೆ ಇತ್ತು. ನನಗೋ ೫ ಗಂಟೆಗೇ ಅವಸರ ಶುರುವಾಯ್ತು. ಹಾಗೂ ಹೀಗು ಮೈಸೂರು ತಲುಪುವವರೆಗೆ ಸಾಕುಬೇಕಾಗಿ ಹೊಯ್ತು. ಆ ವೇಳೆಗೆ ಸಹಪ್ರಯಾಣಿಕರ ಪರಿಸ್ಥಿತಿ ಏನಾಗಿರಬೇಕೆಂದು ಗಮನಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅಂತೂ ಬಸ್ಸು ಇಳಿದ ತಕ್ಷಣ ಅವಸರ ಜಾಸ್ತಿ ಆಯ್ತು. ನನ್ನ ಗ್ರಹಚಾರಕ್ಕೆ ಅವತ್ತೇ ಹೊಸವರ್ಷ ಬೇರೆ, ಅಟೋದವರು ಎಷ್ಟು ಕೆಳುತ್ತಾರೊ ಅಷ್ಟು ಕೊಡಬೆಕು! ಚೌಕಾಷಿ ಮಾಡಲು ಅವಕಾಶವೇ ಇಲ್ಲ. ಅದಿರಲಿ, ನನಗದಕ್ಕೆ ಪುರುಸೊತ್ತೂ ಇರಲಿಲ್ಲ ಬಿಡಿ! ಬೇಗ ಲಾಡ್ಜ ಓಂದಕ್ಕೆ ಒಯ್ದು ವಗಿ ಎಂದು ಆಟೊದವನಿಗೆ ಬೇಡಿಕೊಂಡೆ. ಅವನಿಗೆ ನನ್ನ ಪರಿಸ್ಥಿತಿ ಅರ್ಥವಾಗಿರಬೆಕು. ಅವನು ಅಲ್ಲೆ ಪಕ್ಕದಲ್ಲೆ ಇದ್ದ ಅದ್ಭುತವಾದ ಲಾಡ್ಜ ಒಂದಕ್ಕೆ ವಯ್ದು ವಗೆದ. ಅವನು ಕೆಳಿದಷ್ಟು ಹಣ ತೆತ್ತು ಲಾಡ್ಜು ಸೇರಿಕೊಂಡು ನಿಟ್ಟುಸಿರಿಟ್ಟೆ! ಆದರೆ ಅದೊಂದು ಕಚಡಾ ಹೋಟೇಲ್ ಆಗಿದ್ದರಿಂದ ಬೇರೆ ಕಡೆಗೆ ಹೋಗಬೆಕಾಯ್ತು. ಹೊಸವರ್ಷದ ಬೋನಸ್! ಅದಕ್ಕೆ ನಾನು ರಾತ್ರಿ ಪ್ರಯಾಣವಿದ್ದರೆ ಊಟವನ್ನೇ ಮಾಡುವುದಿಲ್ಲ!
ಇನ್ನೂ ಕೆಲವರನ್ನು ನೋಡಿದ್ದೇನೆ. ಅವರು ಶೌಚಸಮಾಧಿಗೆ ಹೋದರೆಂದರೆ ಹೊರಗೆ ಬರುವುದು ಒಂದೆರಡು ಗಂಟೆಗಳ ಬಳಿಕ. ಅಷ್ಟರವರೆಗೆ ಬೇರೆಯವರ ಗತಿ ಅಧೋಗತಿ! ಅದಕ್ಕೆ ಅಂಥವರು ಮನೆಲಿದ್ದರೆ ಬೇರೆಯವರು, ಬೇಗ ಎದ್ದು ತಮ್ಮ ಕಾರ್ಯ ಮುಗಿಸುವುದು ಒಳ್ಳೆಯದು. ನನ್ನ ಸಂಬಂಧಿಯೊಬ್ಬ ಇದೇ ಜಾತಿಗೆ ಸೇರಿದವನು. ಅವನು ಬೆಳಗಿನ ಪೇಪರ್ ಓದುವುದು ಅಲ್ಲಿಯೇ! ಪೇಪರ್ ಒಂದೇ ಅಲ್ಲ, ಕತೆ, ಕಾದಂಬರಿ ಏನೇ ಆದರೂ ಸರಿ ಅದನ್ನೊಯ್ದು ಶೌಚ ಸಮಾಧಿಯಲ್ಲಿ ಕೂತನೆಂದರೆ ಪೂರ್ತಿ ಕತೆ ಮುಗಿದಾದ ಮೇಲೆಯೇ ಹೊರಗೆ ಬರುವುದು. ಆದರೆ ಆಮೇಲೆ ಪೇಪರಗಳು, ಪುಸ್ತಕಗಳು ಮಾತ್ರ ಬೆರೆಯವರು ಓದುವ ಸ್ಥಿತಿಯಲ್ಲಿ ಇರುವುದಿಲ್ಲ. ಎಲ್ಲ ಹಸಿ ಹಸಿ! ಆದಕ್ಕೆ ಅವನು ನಮ್ಮ ಮನೆಗೆ ಬರುತ್ತಾನೆಂದರೆ, ನನ್ನ ನೆಚ್ಚಿನ ಪುಸ್ತಕಗಳನ್ನೆಲ್ಲ ಮುಚ್ಚಿ ಇಡುತ್ತೇನೆ.
ನಾನು ಚಿಕ್ಕವನಿದ್ದಾಗ ನಡೆದ ಒಂದು ಘಟನೆಯಂತೂ ತುಂಬಾ ಮೋಜಿನದಾಗಿದೆ. ನಾವು ಮಕ್ಕಳಾಗಿದ್ದಾಗ ಈಗಿನ ತರಹ ಕಂಪ್ಯೂಟರು, ವೀಡಿಯೋ ಗೇಮ್ಸು ಇರಲಿಲ್ಲ ನೋಡಿ. ಆಗೆಲ್ಲ ಚಿನ್ನಿ ದಾಂಡು, ಗೋಲಿ ಇಂಥವೇ ಹಲವು ಬಗೆಯ ಆಟಗಳು. ಆದರೆ ನಮಗೆ ಇಷ್ಟಕ್ಕೆ ತೃಪ್ತಿ ಇರಲಿಲ್ಲ. ಹೊಸಾ ಆಟಗಳನ್ನು ಸೃಷ್ಟಿ ಮಾಡ್ತಿದ್ವಿ. ಒಂದು ಸಲ ಹೀಗೇ ಯಾವುದೊ ಹಬ್ಬ ಇತ್ತು. ಎಲ್ಲರ ಮನೆಯಲ್ಲೂ ಒಳ್ಳೆ ಭೂರೀ ಭೊಜನ! ಊಟವಾದ ಮೇಲೆ ಆಟ! ಎಲ್ಲರೂ ಒಂದೆಡೆಗೆ ಸೇರಿದೆವು. ಇವತ್ತು ಯಾವ ಆಟ ಆಡೊದು? ಇದೇ ನಮ್ಮೆಲ್ಲರ ಮುಂದಿದ್ದ ದೊಡ್ಡ ಸಮಸ್ಯೆಯಾಗಿತ್ತು, ಆಗ. ಅಷ್ಟರಲ್ಲೆ ನಮ್ಮಲ್ಲೊಬ್ಬ ಭಯಂಕರವಾಗಿ ಶಬ್ದ ಮಾಡಿದ! ಶಬ್ದ ಎಲ್ಲಿಂದ ಬಂತು ಅನ್ನೊದು ನಿಮ್ಮ ಊಹೆಗೆ ಬಿಟ್ಟ ವಿಷಯ! ಆ ಪರಿ ಹಬ್ಬದ ಊಟವಾದ ಮೇಲೆ ಶಬ್ದ ಎಲ್ಲಿಂದ ತಾನೆ ಬರಲು ಸಾಧ್ಯ! ಎಲ್ಲರೂ ಮೂಗು ಮುಚ್ಚಿಕೊಂಡೆವು, ಸಹಿಸಲಸಾಧ್ಯವಾದ ದುರ್ಗಂಧ! ಇಷ್ಟಕ್ಕೆ ಮುಗಿದಿದ್ದರೆ ಚೆನ್ನಾಗಿತ್ತು. ಆದರೆ ಮತ್ತ್ಯಾವನೋ ಅದೇ ತರಹದ ಶಬ್ದ ಮಾಡಿದ. ಕೇಳಬೇಕೆ, ಅವರಿಬ್ಬರ ಮಧ್ಯೆ ಸ್ಪರ್ಧೆಯೇ ಶುರುವಾಯ್ತು. ಉಳಿದವರೆಲ್ಲ ಇಬ್ಬರಿಗೂ ಹುರಿದುಂಬಿಸಲು ತೊಡಗಿದರು (ಮೂಗು ಮುಚ್ಚಿಕೊಂಡು!). ಹತ್ತು ಆಯಿತು, ಇಪ್ಪತ್ತು ಆಯಿತು, ಊಹುಂ ಇಬ್ಬರಲ್ಲಿ ಯಾರೂ ಸೋಲುವ ಲಕ್ಷಣ ಕಾಣಲಿಲ್ಲ! ಹಾಗೆ ಆಟ ಮುಂದುವರಿಯಿತು. ಸಂಜೆ ಆಗೋಕೆ ಬಂತು. ಇನ್ನೆನು ಆಟದಲ್ಲಿ ಯಾರು ಸೋಲುವರಿಲ್ಲ ಅಂದಾಗ ಇಬ್ಬರಿಗೂ ರಾಜಿ ಮಾಡುವರಿದ್ದೆವು. ಕೊನೆಯದಾಗಿ ಎಂಬಂತೆ ಒಬ್ಬ ಪ್ರಯತ್ನ ನಡೆಸಿದ್ದ. ಅವನ ಪ್ರಯತ್ನ ಸ್ವಲ್ಪ ಜಾಸ್ತಿಯೇ ಅಯ್ತೇನೊ! ಚಣ್ಣದಲ್ಲಿ ಅದರ ಫಲಿತಾಂಶ ಹೊರಬಿತ್ತು. ಮುಂದೆಂದು ಆ ಆಟವನ್ನು ಆಡುವ ಸಾಹಸಕ್ಕೆ ನಾವ್ಯಾರೂ ಹೊಗಲಿಲ್ಲ!
ಈ ತರಹದ ಶಬ್ದ ಮಾಲಿನ್ಯದ (ವಾಯು ಮಾಲಿನ್ಯವೂ ಹೌದು!) ಮೇಲೆ ನಮ್ಮ ಹಿರಿಯರು, ಓಂದು ಶ್ಲೋಕವನ್ನೆ ಸೃಷ್ಟಿ ಮಾಡಿದ್ದಾರೆ!ಭರ್ರಂ ಭುರ್ರಂ ಭಯಂ ನಾಸ್ತಿ!ಟುಸ್ಸಾಕಾರಂ ಘೋರ ಸಂಕಟಂ!ನಿಶ್ಯಬ್ಧಂ ಪ್ರಾಣ ಸಂಕಟಂ!ಈ ಶ್ಲೋಕಕ್ಕೆ ವಿವರಣೆಯ ಅಗತ್ತ್ಯವಿಲ್ಲವೆಂದು ನಂಬಿದ್ದೆನೆ. ಹೀಗೆ ಮೋಜಿನ ಸಂಗತಿಗಳು ಹಲವಾರು. ಸಧ್ಯಕ್ಕಿಷ್ಟು ಸಾಕು ಅನಿಸುತ್ತದೆ. ನೀವೆನಂತೀರಾ?

Tuesday, May 1, 2007

ಕನ್ನಡ ಎಲ್ಲಿದೆ... ಕನ್ನಡ ಎಲ್ಲಿದೆ?

"ಸೀ ಯಾ, ನೋ ಡಾ... ಕಮಿಂಗ್ ಡಾ.... " ಇದೇ ನಾವಾಡುವ ನುಡಿ! ಇದೇ ಸ್ವಾಮಿ ನಮ್ಮ ಗಂಧದ ಗುಡಿಯ ಪಾಡು! ಇಂಗ್ಲೀಷು ನಮ್ಮನ್ನ ಯಾವ ಪರಿ ಆಳ್ತಾ ಇದೆಯೋ ನೋಡಿ. ನಮ್ಮ ಪಕ್ಕದಲ್ಲೇ ಜನರನ್ನು ನೋಡ್ತಾ ಇರ್ತೀವಿ, ತಮ್ಮ ಮಕ್ಕಳ ಜೊತೆ, ಇಂಗ್ಲಿಷಲ್ಲೇ ಅವರ ಸಂಭಾಷಣೆ. ಮೊನ್ನೆ ಒಬ್ಬ ತಾಯಿ ಮಗನಿಗೆ ಕರೀತಾ ಇದ್ದ್ಲು "ಕಮ್ ಫಾಸ್ಟ್". ಎಂಥ ವಿಪರ್ಯಾಸ ನೋಡಿ. ಮಾತೃ ಭಾಷೆ ಅನ್ನೋದಕ್ಕೆ ಅರ್ಥವೇ ಇಲ್ಲದಂತಾಗಿದೆ! ಕನ್ನಡದಲ್ಲಿ "ಬೇಗ ಬಾ ಮಗು" ಅಂತ ಕರದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವೆ? ನಾನು ಇಂಗ್ಲಿಷ್ ಭಾಷೆಯನ್ನು ವಿರೋಧಿಸ್ತಾ ಇಲ್ಲ; ಇಂಗ್ಲಿಷ್ ಮಾತಾಡೋರನ್ನೂ ಅಲ್ಲ. ನಾನು ಹೇಳ್ತಾ ಇರೋದು ಇಂಗ್ಲಿಷ್ ಮಾತಾಡೊ ಸಂದರ್ಭದ ಬಗ್ಗೆ. ನನ್ನ ಒಬ್ನು ಗೆಳೆಯ ಇದ್ದಾನೆ. ಅವ್ನು ಮತ್ತು ಅವನ ಹೆಂಡತಿ ಇಬ್ಬರ ಸಂಭಾಷಣೆ ಯಾವಾಗ್ಲೂ ಇಂಗ್ಲಿಷಲ್ಲೇ! ಮಜಾ ಅಂದ್ರೆ ಅವರಿಬ್ಬರ ಮಾತೃ ಬಾಷೆನೂ ಕನ್ನಡವೇ! ಇಂಥ ಎಷ್ಟೋ ಜನ ಇದ್ದಾರೆ. ಹಾಗೆ ಮಾತಾಡೊದ್ರಲ್ಲಿ ಅವರಿಗೇನೊ ಒಂಥರ ಖುಷಿ. ತಾವು ಶ್ರೇಷ್ಠರು (!) ಅನ್ನುವ ಸಮಾಧಾನ.
ಇಂಗ್ಲಿಷ್ ಬಗೆಗಿನ ಈ ವ್ಯಾಮೋಹ ಇವತ್ತಿನದಲ್ಲ. ಇದು ಬ್ರಿಟಿಷರು ಇಲ್ಲಿ ಬಂದು ತಳ ಊರಿದಾಗಿನಿಂದ ಇದೆ. ಅವರು ಹೋದರು, ಆದರೆ ಇಂಗ್ಲಿಷು ಮಾತ್ರ ಇಲ್ಲಿ ಬೇರು ಬಿಟ್ಟಿತು. ಅದನ್ನು ಮಾತಾಡೊದು ಖಂಡಿತವಾಗಿಯು ತಪ್ಪಲ್ಲ. ಅದು ಅಂತರ್ ರಾಷ್ಟ್ರೀಯ ಭಾಷೆ. ಆದರೆ ಹೆಂಡತಿ, ಮಕ್ಕಳ ಜೊತೆನೂ ಇಂಗ್ಲಿಷೇ ಆಗಬೇಕೆ? ಚೊಕ್ಕವಾಗಿ ಕನ್ನಡದಲ್ಲೇ ಮಾತಾಡಬಾರದೆ? ನಾ ಯಾಕೆ "ಕನ್ನಡಿಗರನ್ನ" ಇಲ್ಲಿ ಎತ್ತಿ ತೋರಸ್ತಾ ಇದಿನಿ ಅಂದ್ರೆ; ಕನ್ನಡಿಗರಲ್ಲೆ ಅಭಿಮಾನ ಶೂನ್ಯತೆ ಜಾಸ್ತಿ ಅನ್ನೊದು ನನ್ನ ಅಭಿಪ್ರಾಯ (ಈ ಅಭಿಪ್ರಾಯ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ!) ನಮ್ಮ ಕನ್ನಡ ಇಷ್ಟು ಕುಲೂಷಿತವಾಗಿದೆ ಅಂದ್ರೆ. ಅದಕ್ಕೊಂದು ಉದಾಹರಣೆಯಾಗಿ ಒಂದು ಘಟಣೆ ನಡೆಯಿತು. ನಮ್ಮ ಕಛೇರಿಗೆ ಸ್ಪೇನದಿಂದ ಒಬ್ಬ ಸಹೋದ್ಯೋಗಿ ಬಂದಿದ್ದ. ಅವನನ್ನು ಒಂದು ಕಡೆ ಊಟಕ್ಕೆ ಕರೆದೊಯ್ಯುತ್ತಿದ್ದೆವು. ಎಫ್ ಎಮ್ ರೇಡಿಯೋದಲ್ಲಿ ಒಬ್ಬಳು ತನ್ನ ಸುಮಧುರವಾದ ಕಂಠದಲ್ಲಿ ಅದು ಕನ್ನಡದಲ್ಲಿ (?!) ಎನೋ ಕಥೆ ಶುರು ಮಾಡಿದ್ಲು. ನಿಮಗೆ ಗೊತ್ತಲ್ಲ ಎಫ್ ಎಮ್ ನ ಕನ್ನಡದಲ್ಲಿ ಇಂಗ್ಲಿಷ್ ಶಬ್ಧಗಳೇ ಜಾಸ್ತಿ. ನಮ್ಮ ಸ್ಪೇನ್ ಗೆಳೆಯ ಹೇಳಿದ "ನಿಮ್ಮ ಭಾಷೆ ಹೆಚ್ಚು ಕಡಿಮೆ ಇಂಗ್ಲಿಷ್ ಇದ್ದ ಹಾಗೆ ಇದೆಯಲ್ಲ!" ನಮ್ಮೆಲ್ಲರ ಮುಖ ಇಂಗು ತಿಂದ ಮಂಗನಂತಾಗಿತ್ತು. ಬೇರೆ ದೇಶದವರನ್ನು ಬಿಡಿ, ನಮ್ಮ ಸಹೋದ್ಯೋಗಿಗಳಲ್ಲೇ ಕೆಲವು ಜನ ತಮಿಳರು, ಕೆರಳದವರು ಇದ್ದಾರೆ. ಅವರಿಗೆಲ್ಲ ಕನ್ನಡ ಕಲಿಸುವ ವ್ಯರ್ಥ ಸಾಹಸ ನಾನು ಆಗಾಗ ಮಾಡ್ತಾ ಇರ್ತೀನಿ (ಅವರಾಗೆ ಕನ್ನಡ ಕಲಿಯುವ ಗೋಜಿಗೆ ಅವರೆಂದೂ ಹೋಗೊದಿಲ್ಲ ಬಿಡಿ. ನಾವೇ ಅವರ ಭಾಷೆಯಲ್ಲಿ ನಿಚ್ಛಳವಾಗಿ ಮಾತಾಡಸ್ತಿವಲ್ಲ!) ಅದರಲ್ಲಿ ಒಬ್ಬ "ಕನ್ನಡ ತುಂಬಾ ಸುಲಭ, ನನಗೆ ಕೆಲವು ಶಬ್ಧಗಳು ಗೊತ್ತು ಅಂದ! ನನಗೋ ಖುಷಿ. ಹೇಳಪ್ಪ ಏನೇನು ಗೊತ್ತು ಅಂದೆ. ಆತ ಹೇಳಿದ "ಎಂಜಾಯ್ ಮಾಡಿ!..... ಲಂಚ್ ಆಯ್ತಾ... " ಇಂಥವೆ ಕೆಲವು ಅಣಿ ಮುತ್ತುಗಳು. ಅಲ್ವೆ ಮತ್ತೆ? ಕನ್ನಡದಷ್ಟು ಸುಲಭದ ಭಾಷೆ ಬೇರೆಲ್ಲಾದರೂ ಉಂಟೆ?! ಹೀಗೆ ಮುಂದುವರಿದರೆ ಇನ್ನು ಕೆಲವು ವರ್ಷಗಳಲ್ಲಿ ಕನ್ನಡದ ಅಸ್ತಿತ್ವವೆ ಇಲ್ಲವಾಗುತ್ತೇನೋ ಅನ್ನೋ ಭಯ ಶುರುವಾಗಿದೆ.ಬನ್ನಿ ನಮ್ಮ ಭಾಷೆಯನ್ನ ಉಳಿಸಿಕೊಳ್ಳೋಣ.

Tuesday, April 24, 2007

ಮಾತಾಡು ಮಂಗಣ್ಣಾ!

ಒಂದು ಸಲ ಒಬ್ಬನಿಗೆ ಒಂದು ಮಂಗ ಸಿಕ್ತು. ಅರೇ ಅದರಲ್ಲೇನು ವಿಶೇಷ ಅಂತೀರಾ? ಆ ಮಂಗಕ್ಕೆ ಮಾತಾಡೊಕೆ ಬರ್ತಿತ್ತು! ಕನ್ನಡದಲ್ಲಿ ನಿಛ್ಛಳವಾಗಿ ಮಾತಾಡ್ತಿತ್ತು. ಆತ ಮನಸ್ಸಿನಲ್ಲೆ ಮಂಡಿಗಿ ತಿಂದ! ಇದನ್ನ ಇಟ್ಕೊಂಡು ಎಷ್ಟೊಂದು ದುಡ್ಡು ಮಾಡ್ಬಹುದು ಅಂತ ಲೆಕ್ಕ ಹಾಕಿದ. ಎಷ್ಟಂದ್ರು ಹುಲು ಮಾನವನಲ್ವೆ?! ಆ ಮಂಗಣ್ಣನ್ನ ಮನೆಗೆ ಕರ್ಕೊಂಡು ಬಂದ. ಇಡೀ ರಾತ್ರಿಯೆಲ್ಲ ಅದ್ರ ಜೊತೆ ಮಾತಾಡೊದ್ರಲ್ಲೆ ಕಳೆದ...
ಮರುದಿನ ಆಫೀಸಿಗೆ ಹೋಗಿ, ಸಹೋದ್ಯೊಗಿಗಳಿಗೆ ಮಂಗಣ್ಣನ ಸುದ್ದಿ ಹೇಳಿದ. ಅದರ ಸುದ್ದಿ ಕೇಳಿ, ಗೆಳೆಯರೆಲ್ಲ ಬಿದ್ದು ಬಿದ್ದು ನಕ್ಕರು. ಅವನಿಗೆ ಹುಚ್ಚು ಹಿಡಿದಿರುವುದು ಅವರಿಗೆ ಖಾತ್ರಿಯಾಯ್ತು. ಆದರೆ, ಅವನು ಅಷ್ಟಕ್ಕೆ ಬಿಡಲಿಲ್ಲ. ಬೆಕಾದರೆ ಬೆಟ್ ಕಟ್ಟಿ ಅಂದ. ಆಯ್ತು ಅಂತ ಎಲ್ಲರು ಮಾತಾಡೊ ಮಂಗಣ್ಣನ ಮೇಲೆ ಬೆಟ್ ಕಟ್ಟಿದ್ರು.
ಆಫೀಸು ಮಗಿದ ಕೂಡಲೇ ಎಲ್ರು ಅವನ ಮನೆಗೆ ಹೊಗಿ ಮಂಗಣ್ಣನ್ನ ಮಾತಾದ್ಸೊದು, ಒಂದು ವೇಳೆ ಅದು ಮಾತಾಡಿಲ್ಲ ಅಂದ್ರೆ ಅವ್ರು ಕಟ್ಟಿರೊ ದುಡ್ಡು ಅವನು ವಾಪಸ್ಸು ಕೊಡಬೇಕು ಅಂತ ನಿರ್ಧಾರ ಆಯ್ತು. ಅವ್ರಿಗೆಲ್ಲ ಗೆದ್ದೇ ಗೆಲ್ತಿವಿ ಅಂತ ಗೊತ್ತಿತ್ತು. ಅವನಿಗೂ ಅಷ್ಟೆ!ಎಲ್ರು ಸಂಜೆ ಅವನ ಮನೆಗೆ ಬಂದ್ರು. ಅವನು ಮಂಗಣ್ಣನ ಬಳಿಗೆ ಹೋಗಿ, ಅದಕ್ಕೆ ಎಲ್ಲ ವಿಷಯ ಹೆಳ್ದ. ಮಾತಾಡಿ ನನ್ನ ಮರ್ಯಾದೆ ಉಳಿಸು ಅಂತ ಕೆಳ್ಕೊಂಡ. ಮಂಗಣ್ಣ ಅವನೆಡೆಗೆ ಒಂದು ಸಲ ತುಂಟ ನಗೆಯ ನೋಟ ಬೀರಿತು. ಆದರೆ ಏನೂ ಮಾತಾಡಲೆ ಇಲ್ಲ! ಇವನಿಗೆ ಗಂಟಲು ಆರಿದಂತಾಯಿತು. ನಿನ್ನೆಯೆಲ್ಲಾ ವಟ ವಟನೆ ಮಾತಾಡಿದ ಮಂಗಣ್ಣನಿಗೆ ಈಗೆನಾಯಿತು ಅಂತ ಅವನಿಗಾದರೂ ಹೇಗೆ ಅರ್ಥವಾದೀತು. ಅದರ ಮುಂದೆ ಗೋಗರೆದ, ಕಣ್ಣೀರಿಟ್ಟ. ಊಹುಂ, ಮಂಗಣ್ಣನಿಗೆ ಮಾತ್ರ ಅವನ ಮೇಲೆ ಕರುಣೆ ಬಂದಂತೆ ತೋರಲಿಲ್ಲ. ಒಂದು ಶಬ್ದವನ್ನು ಮಾತಾಡಲಿಲ್ಲ. ಗೆಳೆಯರೆಲ್ಲ ಅವನಿಗೆ ಬುದ್ಧಿ ಹೆಳಿ, ಇನ್ನಾದರು ಇಂಥ ಹುಚ್ಚಾಟ ಮಾಡದಿರುವಂತೆ ಎಚ್ಚರಿಸಿ ಹೊರಟು ಹೊದರು. ತಮ್ಮ ಪಾಲಿನ ಹಣವನ್ನು ಮಾತ್ರ ನೆನಪು ಹಾರದೆ ಇಸಿದುಕೊಂಡು ಹೋದರು.ಇವನಿಗೆ ಹುಚ್ಚು ಹಿಡಿಯೊದೊಂದೆ ಬಾಕಿ. ಕೈಲಿದ್ದ ಹಣಾನೂ ಹೋಯ್ತು. ತಲೆ ಮೇಲೆ ಕೈ ಹೊತ್ತು ಕುಳಿತಿದ್ದ. ಅಷ್ಟರಲ್ಲೆ, ಮಂಗಣ್ಣ ನಿಧಾನವಾಗಿ ಅವನ ಬಳಿ ಬಂತು; ಅವನ ಹೆಗಲ ಮೇಲೆ ಕೈ ಇಟ್ಟು ಹೀಗೆ ಅರುಹಿತು "ಯಾಕೆ, ಬೇಜರಾಯ್ತಾ?". ಅವನಿಗೆ ಕೆಂಡದಂಥ ಕೋಪ ಬಂತು (ಬರದೇ ಇರುತ್ತದೆಯೆ ಮತ್ತೆ?). ಆತ ಕೋಪದಿಂದ ಕೂಗಿದ "ಆಗ್ಲೇ ಇಷ್ಟು ಮಾತಾಡೋಕೆ ಏನಗಿತ್ತು ನಿಂಗೆ ಧಾಡಿ?!". ಮಂಗಣ್ಣ ಅಷ್ಟೇ ಶಾಂತನಾಗಿ ನುಡಿದ "ಅಯ್ಯೊ ಹುಚ್ಹಪ್ಪಾ, ಆಗ ನಾನು ಮಾತಾಡಿದ್ದಿದ್ರೆ ನಿನಗೆ ಪುಟುಗೋಸಿ ಸಾವಿರಾರು ರುಪಾಯಿ ಗೆಲ್ತಿದ್ದೆ. ನಾಳೆ ಮತ್ತೆ ಅವ್ರ ಜೊತೆನೇ ಬೆಟ್ ಕಟ್ಟು ಈ ಸಲ ಲಕ್ಷಾಂತರ ರುಪಾಯಿ ಕಟ್ತಾರೆ. ಆಮೇಲೆ ನಾನು ಮಾತಾಡ್ತಿನಿ". ಅವನಿಗೆ ಅರ್ಥಾ ಆಯ್ತು! ಮರುದಿನ ಗೆಳೆಯರೆದುರು ಮತ್ತೆ ಚಾಲೆಂಜ್ ಮಾಡ್ದ. ಈ ಸಲ ಮಂಗಣ್ಣ ಮಾತಾಡ್ತು. ಆತ ಒಂದು ದಿನದಲ್ಲೆ ಲಕ್ಷಾಧೀಶನಾದ!